ಕವಿತೆಯೆಂದರೆ


ಕವಿತೆಯೆಂದರೆ
ಚಂದ್ರನ ಮೇಲಿನ ಕಪ್ಪು ಕಲೆ
ನಿಶೆಯ ನಿದ್ದೆಗೆಡಿಸುವ ಉಷೆ
ಬಾನಿನ ಅಗಾಧತೆ ಭಾನುವಿನ ಪ್ರಖರತೆ


ಕವಿತೆಯೆಂದರೆ
ರಕ್ತದೊಳಗಣ ಕೆಂಪುಕಣ
ತಲೆಯೊಳಗಣ ಜ್ಞಾನಗಣ
ಕೈಯಲ್ಲಿಯ ಕಸಬರಿಗೆ


ಕವಿತೆಯೆಂದರೆ
ಭೋಗದ ಪ್ರತಿಫಲನ
ಮಿರುಗುವ ಮಕಮಲ್ಲಿನ ಹೊದಿಕೆ
ಧಗಧಗಿಸುವ ಕೆಂಡದ ಮೇಲಿನ ನಡಿಗೆ


ಕವಿತೆಯೆಂದರೆ
ಹುಲ್ಲಿನ ಬುಡದ ಬೇರಿನ ಕಂಪು
ಕೆಚ್ಚಲಿಗೆ ಬಾಯಿಟ್ಟ ಹಸುಗರುವಿನ ಹುಮ್ಮಸ್ಸು
ಹದಗೆಟ್ಟ ವಾಸ್ತವ್ಯದ ಹರಕು ಚಾಪೆ


ಕವಿತೆಯೆಂದರೆ
ವಾಚ್ಯ ಸೂಚ್ಯಗಳ ಸೂತಕ ಕೊಳೆ
ಕೀರ್‍ತಿಶೇಷರ ಕಸರತ್ತು ಖಾನೆ
ವಿದ್ವಾಂಸರ ಸರಕಿನ ವ್ಯಾಪಾರ
ಕವಿತೆಯೆಂದರೆ ಜೂಜು, ನಾಣ್ಯ, ವೈಯಾರಿ
ಕವಿತೆಯೆಂದರೆ ಮಗು, ದೈವ, ರಾಕ್ಷಸ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪
Next post ಮುಸ್ಸಂಜೆಯ ಮಿಂಚು – ೧೨

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys